Slide
Slide
Slide
previous arrow
next arrow

ಮನುವಿಕಾಸದಿಂದ ವಿಶ್ವ ಭೂದಿನ ಕಾರ್ಯಕ್ರಮ

300x250 AD

ಶಿರಸಿ: ಇಲ್ಲಿನ ಮನುವಿಕಾಸ ಸಂಸ್ಥೆಯು ಸಿಎಂಎಸ್ ಫೌಂಡೇಶನ್ ಸಹಯೋಗದೊಂದಿಗೆ ವಿಶ್ವ ಭೂ ದಿನದ ಅಂಗವಾಗಿ ಶಿರಸಿ ತಾಲೂಕಿನ ಹಲಗದ್ದೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಮರಗುಂಡಿ ಗ್ರಾಮದಲ್ಲಿ ವಿಶ್ವ ಭೂ ದಿನ ಕಾರ್ಯಕ್ರಮವನ್ನು ಮಹಿಳೆಯರಿಗಾಗಿ ಆಯೋಜಿಸಲಾಗಿತ್ತು.

ಸಿ‌.ಎಂ.ಎಸ್ ಸಂಸ್ಥೆಯನ್ನು ಪ್ರತಿನಿಧಿಸಿ ಆಗಮಿಸಿದ ಅರುಣ್ ಕುಮಾರ್ ರೈತ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿ, ದೇಶಕ್ಕೆ ಕೃಷಿಕರು ಬೆನ್ನೆಲುಬಾಗಿದ್ದಾರೆ. ಕೃಷಿಯಿಲ್ಲದೆ ಬದುಕನ್ನು ಊಹಿಸಲು ಸಾಧ್ಯವಿಲ್ಲ, ಉತ್ತಮ ಮಳೆ ಬೆಳೆಗಳಿಂದ ರೈತರು ಸಮೃದ್ಧ ಕೃಷಿಯನ್ನು ಮಾಡಬಹುದು ಎಂದು ಹೇಳಿದರು.

300x250 AD

ಮರಗುಂಡಿಯ ರೈತ ಮಹಿಳೆಯರಿಗೆ ವಿವಿಧ ಬಗೆಯ ತರಕಾರಿ ಬೀಜಗಳನ್ನ ವಿತರಿಸಿ ಅವುಗಳ ಬಿತ್ತನೆ ಮಾಡುವ ಪ್ರಾತ್ಯಕ್ಷಿಕೆಯನ್ನು ಮಾಡಲಾಯಿತು. ರಂಗೋಲಿ ಸ್ಪರ್ಧೆಯನ್ನು ಕೂಡ ಆಯೋಜಿಸಲಾಗಿತ್ತು.
ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮನುವಿಕಾಸ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top